ಯಾಕೆ ಮೂಕವಾಗಿದೆ ನಿನ್ನ ಮುರಳಿ
ಬರಲಿ ಗಾನ ಸುಧೆ ಅದರಲರಳಿ ....
ಮೌನವಾಗಿದೆ ಮನ
ಹೊತ್ತು ಹೋಗದು ಕೃಷ್ಣ
ಬೇಗ ನುಡಿಸೋ ನಿನ್ನ ಕೊಳಲನ ಆ.... ಆ... ।।ಯಾಕೆ ।।
ನಿನ್ನ ವೇಣು ನಾದ ಕೇಳೆ
ನೋಡು ಕಾದಿಹಳು ಇಳೆ
ಪಶು ಪಕ್ಷಿಗಳು ಕಾತರಿಸಿಹವು
ಕೇಳೆ ನಿನ್ನ ಗಾನ ಸುಧೆ ।। ಯಾಕೆ ।।
ನಿನ್ನ ಅಧರ ಸೋಕೇ ಕೊಳಲು
ಮದುರನಾದ ಉಲಿವುದು
ಶಾರದೆಯೇ ಬರುವಳಿಲ್ಲಿ
ಗಾನಾಮೃತ ಕೇಳಲು ।।ಯಾಕೆ।।
ನೋಡು ನಿನ್ನ ಮುತ್ತಿಹವು
ಅಂಬಾ ಎನ್ನುತ ಗೋವುಗಳು
ನಿನ ಮೋಹನ ಮುರಳಿ ದನಿಗೆ
ಜಗವೇ ಮರುಳು ಮರಳು ।।ಯಾಕೆ।।
.....ಸುನಿ
No comments:
Post a Comment